19/09/2017
“ಜನ್ಮಾದ್ಯಸ್ಯ” ಎನ್ನುವದನ್ನು ಕೆಲವು ಮಾಯಾವಾದಿಗಳು “ಜನ್ಮ ಆದ್ಯಸ್ಯ” ಎಂದು ವಿಭಾಗ ಮಾಡುತ್ತಾರೆ. ಟೀಕಾಕೃತ್ಪಾದರು ಅದನ್ನು ಖಂಡಿಸಿ “ಜನ್ಮಾದಿ ಅಸ್ಯ” ಎಂಬ ವಿಭಾಗವೇ ವೇದವ್ಯಾಸದೇವರಿಗೆ ಸಮ್ಮತವಾದದ್ದು ಎಂದು ಪ್ರತಿಪಾದಿಸುತ್ತಾರೆ. ಅದರ ವಿವರಣೆ ಇಲ್ಲಿದೆ. ಟೀಕಾಕೃತ್ಪಾದರ ವ್ಯಾಖ್ಯಾನ ಏಕೆ ತಪ್ಪಾಗಿರಬಾರದು ಎಂಬ ಆಧುನಿಕರ ಪ್ರಶ್ನೆಗೂ ಇಲ್ಲಿ ಉತ್ತರವಿದೆ. ಅವರ ಮಾತಿನ ಪರಿಶುದ್ಧಿಯ ಸಮರ್ಥನೆಯೊಂದಿಗೆ. ಶಾಸ್ತ್ರಗಳ ಸರಿಯಾದ ಅರ್ಥವನ್ನು ತಿಳಿದರೆ ಸಾಕು, ತಪ್ಪಾದದ್ದನ್ನು ಏಕೆ ಖಂಡಿಸಬೇಕು ಎನ್ನುವದಕ್ಕೆ ಉಪನಿಷತ್ತು ಮತ್ತು ಶ್ರೀಮದಾಚಾರ್ಯರು ನೀಡಿದ “ಭಯಂಕರ” ಉತ್ತರದ ವಿವರಣೆಯೂ ಈ ಉಪನ್ಯಾಸದಲ್ಲಿ ಉಪಲಬ್ಧವಿದೆ. ತಪ್ಪನ್ನು ಖಂಡಿಸಬಾರದು ಎಂದು ತಿಳಿದಿರುವ ಜನ ಕೇಳಲೇಬೇಕಾದ ಪರಮತತ್ವವನ್ನು ಆಚಾರ್ಯರು ಪ್ರತಿಪಾದಿಸಿದ್ದಾರೆ. ತಪ್ಪದೇ ಕೇಳಿ.
Play Time: 45:21
Size: 6.50 MB